-
“ಸತ್ಯವೇದದಲ್ಲಿನ ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರದ ಕಥೆಯು ನಮಗೆ ಹೇಗೆ ಸಂಬಂಧಿಸಿದೆ ಎಂದು ನಮ್ಮಲ್ಲಿ ಹಲವರಿಗೆ ಅರ್ಥವಾಗುತ್ತಿಲ್ಲ. ಇದುದುರದೃಷ್ಟಕರ ಘಟನೆ ಮತ್ತು ಆದಾಮ ಮತ್ತು ಹವ್ವಳ ಮೇಲೆ ಪರಿಣಾಮ ಬೀರಿತು ಮತ್ತು ಅದರಿಂದ ನಾವು ತಪ್ಪಿಸಿಕೊಂಡಿದ್ದೇವೆ ಎಂದು ನಾವು ಭಾವಿಸುತ್ತೇವೆ. ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರದಿಂದ ನೀವು ನಿಜವಾಗಿಯೂ ತಪ್ಪಿಸಿಕೊಂಡಿದ್ದೀರಾ? ಈ ನೇರ ಪುಸ್ತಕದಲ್ಲಿ, ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರವು ಇಂದಿಗೂ ಅಸ್ತಿತ್ವದಲ್ಲಿದೆ ಎಂದು ನೀವು ತಿಳಿಯುವಿರಿ. ಆದಾಮ ಮತ್ತು ಹವ್ವಳಿಗೆಮಾಡಿದಂತೆಯೇ ಅದೇ ಶೋಧನೆಯನ್ನು ಅದು ನಮಗೆ ನೀಡುತ್ತದೆ ಎಂದು ನೀವು ಕಂಡುಕೊಳ್ಳುವಿರಿ. ಈ ಪುಸ್ತಕದಲ್ಲಿ ನೀವು ಸಂಪಾದಿಸಿದ ಜ್ಞಾನವನ್ನುಬಳಸಿಕೊಂಡು ಜೀವನ ಮತ್ತು ಸೇವೆಯ ಮೂಲಕ ಮುಂದೆ ಹೊಗಲು ಸಹಾಯ ಮಾಡುವ ಸತ್ಯಗಳನ್ನು ಸಹ ನೀವು ಕಂಡುಕೊಳ್ಳುವಿರಿ.”
-
ನಿಜವಾಗಿಯೂ ದೇವರು ಅನೇಕ ಜನರನ್ನು ಕರೆದಿದ್ದಾನೆ. ಭೂಮಿಯ ಮೇಲಿನ ನಮ್ಮ ಜೀವೀತವು ಆತನಿಗೆ ಸೇವೆ ಸಲ್ಲಿಸಲು ಒಂದು ಅವಕಾಶವಾಗಿದೆ, ಮತ್ತು ನೀವು ದೇವರ ರಾಜ್ಯಕ್ಕಾಗಿ ಮಾಡುತ್ತಿರುವ ಕೆಲಸಗಳ ಮೇಲೆ ಆತನ ಕಣ್ಣು ಹೊಂದಿರುವನು. ಈ ಪುಸ್ತಕವು ಉತ್ಸಾಹದಿಂದ ಓದುವಂತೆ ಮಾಡುತ್ತದೆ. ಲೇಖಕನು ಹೇಳಿದ ಸತ್ಯಗಳನ್ನು ನೀವು ಅಂತರ್ಗತ ಮಾಡಿಕೊಂಡರೆ, ನಿಮ್ಮ ಜೀವನದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಬುದ್ದಿವಂತಿಕೆಯನ್ನು ಹೋಂದುವಿರಿ.
-
ಯೇಸು ಕ್ರಿಸ್ತನನ್ನು ನಿಮ್ಮ ಕರ್ತನು ಮತ್ತು ರಕ್ಷಕನನ್ನಾಗಿ ಸ್ವೀಕರಿಸಿದ ನಂತರ ನೀವು ರಕ್ಷಣೆ ಹೊಂದಿದ್ದೀರಿ! ನೀವು ಹೊಸದಾಗಿ ಹುಟ್ಟಿದ ಕ್ರೈಸ್ತರುಮತ್ತು ನಿಮ್ಮ ಹೆಸರು ಜೀವ ಭಾದ್ಯರ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ. ನಿಮ್ಮ ಪ್ರಶ್ನೆ: “ಮುಂದೆ ತೆಗೆದುಕೊಳ್ಳಬೇಕಾದ ಹೆಜ್ಜೆ ಯಾವುದು?” ಕ್ರೈಸ್ತರಾಗಿರುವದು ಉತ್ತಮವಾದ ಹೆಜ್ಜೆ, ಆದರೆ ಅದು ಪ್ರಾರಂಭ ಮಾತ್ರ. ನೀವು ಉತ್ತಮವಾದ, ಬಲವಾದ ಕ್ರೈಸ್ತರಾಗಬೇಕಾಗಿದೆ. ’ಹಾಗಿದ್ದಲ್ಲಿಅದನ್ನು ನಾನು ಹೇಗೆ ಮಾಡಬೇಕು?’ – ಮತ್ತು ಮರಣಕ್ಕೆ ಅಥವಾ ಎತ್ತಲ್ಪಡುವದಕ್ಕೆ ಸಿದ್ದರಾಗಿರುವ ಬಲವಾದ ಕ್ರೈಸ್ತರಾಗಲು ತೆಗೆದುಕೊಳ್ಳಬೇಕಾದ ಹಜ್ಜೆಗಳನ್ನು ಈ ಪುಸ್ತಕದಲ್ಲಿ, ನೀವು ಕಲಿಯುತ್ತೀರಿ
-
ದೀನತೆಯು ಒಂದು ಪ್ರಾಮುಖ್ಯವಾದ ಆತ್ಮೀಕ ಗುಣವಾಗಿದೆ. ಈ ಅಸ್ಪಷ್ಟ ಮೋಡದಂತೆÉ ಮೊಬ್ಬಾಗಿರುವ ಆದರೆ ಪ್ರಮುಖ್ಯವಾದ ಆತ್ಮೀಕ ಗುಣದ ಕುರಿತು ಬರೆಯುವ ಧೈರ್ಯವನ್ನು ಮಾಡಿದವರು ಕೆಲವೇ ಕೆಲವರಿದ್ದಾರೆ. ಈ ರೋಮಾಂಚನಕಾರಿ ಸಂಪುಟದಲ್ಲಿ, ಡ್ಯಾಗ್ ಹೇವರ್ಡ್-ಮಿಲ್ಸ್ನು ಗರ್ವದ ಅನೇಕ ಕುಟಿಲವಾದ ರೂಪಗಳನ್ನು ಬಯಲಿಗೆ ತರುತ್ತಾನೆ. ಈ ಶಕ್ತಿಶಾಲಿ ಪುಸ್ತಕವು ಹೋರಾಟದಲ್ಲಿರುವ ಜೊತೆಯ ಕ್ರೈಸ್ತನಿಂದ ಬರೆಯಲ್ಪಟ್ಟಿದ್ದು, ನಿಮಗೆ ಆಶೀರ್ವಾದ ತರುವದು ಹಾಗೂ ಯೇಸು ಕ್ರಿಸ್ತನ ಮಗುವಿನಂಥ ದೀನತೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ನಿಮಗೆ ಪೋತ್ಸಾಹವನ್ನು ನೀಡುವದು.
-
ಸೇವೆಯು ಕ್ಲೀಷ್ಠಕರವಾದದ್ದು! ಜೀವನವು ಕ್ಲೀಷ್ಠಕರವಾದದ್ದು! ನೋಡುವದಕ್ಕೆ ಸಾಧ್ಯವಿಲ್ಲದ ದೇವರನ್ನು ಹಿಂಬಾಲಿಸುವದು ಅಷ್ಟು ಸುಲಭವಲ್ಲ. ನೀವುಆಲಿಸಲಿಕ್ಕಾಗದ ದೇವರನ್ನು ಅನುಸರಿಸುವದು ಸುಲಭವಲ್ಲ. ನೀವು ಈ ಪುಸ್ತಕವನ್ನು ಓದಿದ್ದಾದರೆ, ದೇವರಿಗೆ ನೀವು ಮಾಡುವ ಸೇವೆಯ ಸುತ್ತ ಇರುವ ಮರ್ಮಗಳ ಹೊರತಾಗಿಯೂ ನೀವು ನಿಮ್ಮ ಸೇವೆಯನ್ನುನೆರವೇರಿಸುವದಕ್ಕೆ ಬೇಕಾದ ಅನೇಕ ಬೀಗದ ಕೈಗಳ ಕುರಿತು ಕಂಡುಕೊಂಡವರಾಗಿರುವಿರಿ. ಈ ಪುಸ್ತಕದಲ್ಲಿ ನಿಮಗೆ ಕರ್ತನಿಂದ ಬರುತ್ತಿರುವ ಸಕಲಮಾರ್ಗಸೂಚಿಗಳನ್ನು ನೀವು ಅನುಸರಿಸುವದು ಪ್ರಾಮುಖ್ಯವಾಗಿರುತ್ತದೆ. ಈ ಪುಸ್ತಕದಲ್ಲಿರುವ ಮರ್ಮಗಳು ನಿಮ್ಮನ್ನು ನಿಮ್ಮ ಸೇವೆಯನ್ನು ಲೋಪವಿಲ್ಲದೆನಡಿಸುವ ದಾರಿಯಲ್ಲಿ ನಡಿಸುತ್ತಿವೆ. ಒಂದು ದಿನ ನೀವು ಈ ಮಾತುಗಳನ್ನು ಹೇಳುವಿರಿ, “ನಾನು ನನ್ನ ಓಟವನ್ನು ಕಡೇಗಾಣಿಸಿದ್ದೇನೆ ಹಾಗೂ ನನ್ನ ಸೇವೆಯನ್ನು ನೆರವೇರಿಸಿದ್ದೇನೆ!” ನೀವುನಿಮ್ಮ ಸೇವೆಯನ್ನು ಲೋಪವಿಲ್ಲದೆ ನಡಿಸುವದಕ್ಕೆ ಕೃಪೆಯೂ ಶಕ್ತಿಯೂ ನಿಮಗೆ ದೊರಕಲಿ!
-
“ಈ ಪುಸ್ತಕದ ಶೀರ್ಷಿಕೆ ತಕ್ಷಣವೇ ಸಣ್ಣ ಮಕ್ಕಳು ಸಂತೋಷದಿಂದ ಹಾಡುವ ಬಗ್ಗೆ ಯೋಚಿಸುವಂತೆ ಮಾಡುತ್ತದೆ...ನೀವು ಪ್ರತಿದಿನ ನಿಮ್ಮ ಸತ್ಯವೇದವನ್ನು ಓದುತ್ತೀರಾ? ನೀವು ಪ್ರತಿದಿನ ಪ್ರಾರ್ಥಿಸುತ್ತೀರಾ? ಈ ಪುಸ್ತಕವು ಸತ್ಯವೇದ ಎಂದು ಕರೆಯಲ್ಪಡುವ ಈ ಅದ್ಭುತವಾದ ಒಂದು ಪುಸ್ತಕಕ್ಕೆ ನಿಮ್ಮ ಕಣ್ಣುಗಳನ್ನು ತೆರೆಯುಂತೆ ಮಾಡುತ್ತದೆ. ನೀವು ಸತ್ಯವೇದವನ್ನು ಓದುವಾಗ ಮತ್ತುಪ್ರತಿದಿನ ಪ್ರಾರ್ಥಿಸುವಾಗ ಪ್ರತಿದಿನ ನಿಮಗೆ ಬರುವ ಅದ್ಬುತಗಳನ್ನು ಇದು ನಿಮಗೆ ತೊರಿಸುತ್ತದೆ. ನಿಮ್ಮ ದೈನಂದಿನ ಸತ್ಯವೇದ ಓದುವಿಕೆ ಮತ್ತು ದೈನಂದಿನ ಪ್ರಾರ್ಥನೆನಿಮಗೆ ಆನಂದವುಂಟುಮಾಡಲಿ!”
-
ಸೇವೆಗೆ ನೀಡಿರುವ ಕರೆಯು ನಾಯಕತ್ವಕ್ಕಾಗಿ ನೀಡಿದ ಕರೆಯಾಗಿದೆ. ಇನ್ನೊಂದು ಸಾರಿ, ಸರಳವಾದ ಹಾಗೂ ದೀನ ಮನೋಭಾವದಿಂದ ಡಾ. ಡ್ಯಾಗ್ ಹೇವರ್ಡ್-ಮಿಲ್ಸ್ ತನ್ನನ್ನು ಒಬ್ಬ ಗಮನಾರ್ಹ ಕ್ರೈಸ್ತೀಯ ನಾಯಕನನ್ನಾಗಿ ಮಾಡಿರುವ ತತ್ವಗಳನ್ನು ಸವಿಸ್ತಾರವಾಗಿ ವಿವರಿಸುತ್ತಾನೆ. ಇಲ್ಲಿ ಪ್ರಕಟಗೊಳಿಸಲಾಗಿರುವ ಸತ್ಯಗಳು ಅನೇಕರಲ್ಲಿ ನಾಯಕತ್ವದ ಕಲೆಯನ್ನು ರೂಢಿಸಿಕೊಳ್ಳಲು ಸ್ಪೂರ್ತಿಗೊಳಿಸುವವು.