-
“ಸತ್ಯವೇದದಲ್ಲಿನ ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರದ ಕಥೆಯು ನಮಗೆ ಹೇಗೆ ಸಂಬಂಧಿಸಿದೆ ಎಂದು ನಮ್ಮಲ್ಲಿ ಹಲವರಿಗೆ ಅರ್ಥವಾಗುತ್ತಿಲ್ಲ. ಇದುದುರದೃಷ್ಟಕರ ಘಟನೆ ಮತ್ತು ಆದಾಮ ಮತ್ತು ಹವ್ವಳ ಮೇಲೆ ಪರಿಣಾಮ ಬೀರಿತು ಮತ್ತು ಅದರಿಂದ ನಾವು ತಪ್ಪಿಸಿಕೊಂಡಿದ್ದೇವೆ ಎಂದು ನಾವು ಭಾವಿಸುತ್ತೇವೆ. ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರದಿಂದ ನೀವು ನಿಜವಾಗಿಯೂ ತಪ್ಪಿಸಿಕೊಂಡಿದ್ದೀರಾ? ಈ ನೇರ ಪುಸ್ತಕದಲ್ಲಿ, ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿನ ಮರವು ಇಂದಿಗೂ ಅಸ್ತಿತ್ವದಲ್ಲಿದೆ ಎಂದು ನೀವು ತಿಳಿಯುವಿರಿ. ಆದಾಮ ಮತ್ತು ಹವ್ವಳಿಗೆಮಾಡಿದಂತೆಯೇ ಅದೇ ಶೋಧನೆಯನ್ನು ಅದು ನಮಗೆ ನೀಡುತ್ತದೆ ಎಂದು ನೀವು ಕಂಡುಕೊಳ್ಳುವಿರಿ. ಈ ಪುಸ್ತಕದಲ್ಲಿ ನೀವು ಸಂಪಾದಿಸಿದ ಜ್ಞಾನವನ್ನುಬಳಸಿಕೊಂಡು ಜೀವನ ಮತ್ತು ಸೇವೆಯ ಮೂಲಕ ಮುಂದೆ ಹೊಗಲು ಸಹಾಯ ಮಾಡುವ ಸತ್ಯಗಳನ್ನು ಸಹ ನೀವು ಕಂಡುಕೊಳ್ಳುವಿರಿ.”
-
“ಕರ್ತನನ್ನು ಸೇವಿಸುವುದು ದೊಡ್ಡ ವಿಷಯ ಎಂದು ನೀವು ಕೇಳಿರಬಹುದು; ಆದರೆ ನಮ್ಮ ದೇವರಾದ ಕರ್ತನನ್ನು ಸೇವಿಸುವುದು ಎಷ್ಟು ದೊಡ್ಡದು ಎಂದುನೀವು ಸ್ಪಷ್ಟವಾಗಿ ಯೋಚಿಸಿರಲಾರಿರಿ. ಡ್ಯಾಗ್ ಹೆವಾರ್ಡ್-ಮಿಲ್ಸ್ ಅವರ ಈ ವಿಶೇಷ ಪುಸ್ತಕದಲ್ಲಿ ದೇವರ ಒಬ್ಬ ಸೇವಕನು ಯಾರು ಮತ್ತು ನೀವುಕರ್ತನನ್ನು ಹೇಗೆ ಸೇವಿಸಬಹುದು ಎಂದು ನೀವು ಅರ್ಥಮಾಡಿಕೊಳ್ಳುವಿರಿ. ಕರ್ತನನ್ನು ಸೇವಿಸುವವರು ಮತ್ತು ಆತನನ್ನು ಸೇವಿಸದವರ ನಡುವಿನ ವ್ಯತ್ಯಾಸವನ್ನು ನೀವು ಪ್ರಾಯೋಗಿಕವಾಗಿ ತಿಳಿದುಕೊಳ್ಳುವಿರಿ! ಕರ್ತನನ್ನು ಸೇವಿಸುವವರೊಂದಿಗೆ ನಿಮ್ಮನ್ನು ಕೂಡ ಎಣಿಸುವಂತಾಗಲಿ!”
-
ಅತ್ಯುತ್ತಮ ಕೆಲಸದಲ್ಲಿ, ಡಗ್ ಹೇವರ್ಡ್-ಮಿಲ್ಸ್ ರವರು ಇಂದಿನ ಸೇವಯಲ್ಲಿರುವ ನಿಜ-ಜೀವನದ ಪರಿಸ್ಥಿತಿಗಳನ್ನು ಪರಿಶೀಲಿಸುತ್ತಿದ್ದಾರೆ. ಅವರು ಹಣಕಾಸು, ರಾಜಕೀಯ, ಬಿನ್ನ ಲಿಂಗದವರೊಂದಿಗೆ ಸಂಬಂಧಕಲ್ಪಿಸುವ ಬಗ್ಗೆ, ಮತ್ತು ಸೇವಾ ಪರಸ್ಪರ ಕ್ರಿಯೆ, ಇಂಥ ಪ್ರಾಯೋಗಿಕ ಸಮಸ್ಯೆಗಳನ್ನು ಕುರಿತಾಗಿ ಹೇಳುತ್ತಾರೆ. ನಿಮ್ಮ ಕರೆಯನ್ನು ಮೂಲಭೂತವಾಗಿ ಅಭ್ಯಾಸಿಸಲು ಸಾಮಾನ್ಯ ತಿಳುವಳಿಕೆಯ ಮಾರ್ಗದರ್ಶಿಯಾಗಿರುವ ಈ ಪುಸ್ತಕವು ಪ್ರತಿಯೊಬ್ಬ ಕ್ರೈಸ್ತ ನಾಯಕನಿಗೆ ಅತ್ಯಗತ್ಯವಾಗಿದೆ. ಇದನ್ನು ಸಾಮಾನ್ಯವಾಗಿ ಸತ್ಯವೇದ ಶಾಲೆಗಳಿಗೆ ಮತ್ತು ಕ್ರೈಸ್ತಪಾದ್ರಿಗಳಿಗೆ ಹೆಚ್ಚಾಗಿ ಶಿಫಾರಸುಮಾಡಲಾಗಿದೆ.ಲೇಖಕರ ಪರಿಚಯ
-
“ನೀವು ಜೀವನದ ಮೂಲಕ ಪ್ರಯಾಣಿಸುವಾಗ ಅದೃಶ್ಯ ಜಗತ್ತು ನೈಜ ಜಗತ್ತು ಮತ್ತು ಈ ಭೌತಿಕ ಪ್ರಪಂಚವು ಅದೃಶ್ಯ ಜಗತ್ತಿನಲ್ಲಿ ಕೆಲವು ವಿಷಯಗಳನ್ನು ಮಾತ್ರಪ್ರಕಟಿಸುತ್ತದೆ. ನಿಮಗೆ ಗೋಚರಿಸುವ ಶತ್ರುಗಳಿರುವಂತೆಯೇ, ನಿಮಗೂ ಅದೃಶ್ಯ ಶತ್ರುಗಳು ಸಹ ಇರುತ್ತಾರೆ. ನಿಮ್ಮ ಶತ್ರು, ಅವನ ತಂತ್ರಗಳು, ಅವನ ಶೈಲಿ ಮತ್ತುಶಸ್ತ್ರಾಸ್ತ್ರಗಳನ್ನು ತಿಳಿಯದೆ ನೀವು ಅವನೊಂದಿಗೆ ಹೋರಾಡಬಹುದೇ? ಈ ಪುಸ್ತಕವು ನಿಮ್ಮ ಜೀವನದ ಪ್ರಯಾಣಕ್ಕೆ ಅತ್ಯಗತ್ಯವಾದ ಸಾಧನವಾಗಿದೆ. ಈ ಪುಸ್ತಕದಲ್ಲಿ ನಿಮ್ಮ ಅದೃಶ್ಯದ ಶತ್ರುಗಳು ಯಾರು, ಅವರ ಅಸ್ತಿತ್ವದ ಮೂಲ, ಅವರಗುಣಲಕ್ಷಣಗಳು ಮತ್ತು ಅವರ ವಿರುದ್ಧದ ಹೋರಾಟವನ್ನು ಹೇಗೆ ಗೆಲ್ಲುವುದು ಎಂದು ನೀವು ಕಲಿಯುವಿರಿ. ನಿಮ್ಮ ಅದೃಶ್ಯ ಶತ್ರುಗಳನ್ನು ಜಯಿಸಲು ಈ ಅಮೂಲ್ಯ ಪುಸ್ತಕವು ನಿಮಗೆ ಸಹಾಯ ಮಾಡಲಿ!”
-
“ಈ ಪುಸ್ತಕದ ಶೀರ್ಷಿಕೆ ತಕ್ಷಣವೇ ಸಣ್ಣ ಮಕ್ಕಳು ಸಂತೋಷದಿಂದ ಹಾಡುವ ಬಗ್ಗೆ ಯೋಚಿಸುವಂತೆ ಮಾಡುತ್ತದೆ...ನೀವು ಪ್ರತಿದಿನ ನಿಮ್ಮ ಸತ್ಯವೇದವನ್ನು ಓದುತ್ತೀರಾ? ನೀವು ಪ್ರತಿದಿನ ಪ್ರಾರ್ಥಿಸುತ್ತೀರಾ? ಈ ಪುಸ್ತಕವು ಸತ್ಯವೇದ ಎಂದು ಕರೆಯಲ್ಪಡುವ ಈ ಅದ್ಭುತವಾದ ಒಂದು ಪುಸ್ತಕಕ್ಕೆ ನಿಮ್ಮ ಕಣ್ಣುಗಳನ್ನು ತೆರೆಯುಂತೆ ಮಾಡುತ್ತದೆ. ನೀವು ಸತ್ಯವೇದವನ್ನು ಓದುವಾಗ ಮತ್ತುಪ್ರತಿದಿನ ಪ್ರಾರ್ಥಿಸುವಾಗ ಪ್ರತಿದಿನ ನಿಮಗೆ ಬರುವ ಅದ್ಬುತಗಳನ್ನು ಇದು ನಿಮಗೆ ತೊರಿಸುತ್ತದೆ. ನಿಮ್ಮ ದೈನಂದಿನ ಸತ್ಯವೇದ ಓದುವಿಕೆ ಮತ್ತು ದೈನಂದಿನ ಪ್ರಾರ್ಥನೆನಿಮಗೆ ಆನಂದವುಂಟುಮಾಡಲಿ!”
-
ಹೊಸ ಕ್ರೈಸ್ತರು ತಮ್ಮ ರಕ್ಷಣೆಯ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ಹೊಸ ಜೀವನವನ್ನುನಿಯಂತ್ರಿಸುವ ತತ್ವಗಳನ್ನು ಕಲಿಯುವುದು ಬಹಳ ಮುಖ್ಯವಾಗಿದೆ. ಹೊಸ ವಿಶ್ವಾಸಿಗಳಿಗೆ ಪ್ರಮುಖ ಸಂಗತಿಗಳನ್ನು ಈಅಗತ್ಯವನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಹೊಸ ಕ್ರೈಸ್ತರು ತಮ್ಮ ಹೊಸ ನಂಬಿಕೆಯಲ್ಲಿ ವಿಜಯಶಾಲಿಯಾಗಿನಡೆಯಲು ಒಂದು ಅಡಿಪಾಯವನ್ನು ಒದಗಿಸಲಾಗಿದೆ.